
ತ್ರಿಶೂರ್ – ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ‘ಭಾರತ ಮಾತೆ’ ಎಂದು ಕರೆದ ಕೇಂದ್ರ ಸಚಿವ ಹಾಗೂ ಕೇರಳದ ಬಿಜೆಪಿ ಏಕೈಕ ಸಂಸದ ಸುರೇಶ್ ಗೋಪಿ, ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾಕರನ್ ಅವರನ್ನು ‘ಧೈರ್ಯಶಾಲಿ ಆಡಳಿತಗಾರ’ ಎಂದು ಬಣ್ಣಿಸಿದ್ದಾರೆ…!
ಕರುಣಾಕರನ್ ಹಾಗೂ ಮಾರ್ಕ್ಸ್ವಾದಿ ಇ ಕೆ ನಾಯನಾರ್ ಅವರು ನನ್ನ ರಾಜಕೀಯ ಗುರುಗಳು ಎಂದು ಸುರೇಶ್ ಗೋಪಿ ಹೇಳಿಕೊಂಡಿದ್ದಾರೆ…!!
ಪುನ್ಕುನ್ನಲ್ಲಿರುವ ಕರುಣಾಕರನ್ ಅವರ ಸ್ಮಾರಕ “ಮುರಳಿ ಮಂದಿರಂ”ಗೆ ಭೇಟಿ ನೀಡಿ ನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರುಣಾಕರನ್ ಅವರು “ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪಿತಾಮಹ” ಎಂದು ಕೊಂಡಾಡಿದ್ದಾರೆ…!
ನಾನು ನನ್ನ ರಾಜಕೀಯ ಗುರುಗಳಿಗೆ (ಕರುಣಾಕರನ್) ಗೌರವ ಸಲ್ಲಿಸಲು ಬಂದಿದ್ದೇನೆ, ಸ್ಮಾರಕಕ್ಕೆ ಭೇಟಿ ನೀಡಿರುವುದಕ್ಕೆ ಯಾವುದೇ ರಾಜಕೀಯ ಅರ್ಥವನ್ನು ಕಲ್ಪಿಸಬಾರದು ಎಂದು ಅವರು ಹೇಳಿದ್ದಾರೆ…!!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಈ ಚುನಾವಣೆಯಲ್ಲಿ ಕರುಣಾಕರನ್ ಪುತ್ರ ಹಾಗೂ ಕಾಂಗ್ರೆಸ್ ನಾಯಕ ಕೆ ಮುರಳೀಧರನ್ ಅವರನ್ನು ಸೋಲಿಸಿದ್ದಾರೆ…!